Thursday, April 10, 2008

ಪ್ರಕಟಣೆ-೬



ಮಿತ್ರರೆ,

ಮಂಥನ ಜಯನಗರ - ಚಿಂತಕ ಲೇಖಕರ ವೇದಿಕೆ ಇದೇ ಭಾನುವಾರ ಉಪನ್ಯಾಸ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.

ವಿಷಯ: ಆಧುನಿಕ ಭಾರತದ ವೈಜ್ಞಾನಿಕ ಸಾಧನೆಗಳು

ಉಪನ್ಯಾಸಕರು: ಶ್ರೀ ಹಾಲ್ದೊಡ್ಡೇರಿ ಸುಧೀಂದ್ರ
ಲೇಖಕರು, ಅಂಕಣಕಾರರು ಹಾಗೂ ಉಪ ಮಹಾ ವ್ಯವಸ್ಥಾಪಕರು
ಹಿಂದೂಸ್ತಾನ್ ವಿಮಾನ ಕಾರ್ಖಾನೆ

ದಿನಾಂಕ: ೧೩ ಏಪ್ರಿಲ್ ೨೦೦೮ ಭಾನುವಾರ

ಸಮಯ: ಸಂಜೆ ೪.೩೦ ಗಂಟೆಗೆ

ಸ್ಥಳ: ರಾಷ್ಟ್ರೋತ್ಥಾನ ಶಾರೀರಿಕ ಶಿಕ್ಷಾಕೇಂದ್ರ
೧೦ ನೇ ಮುಖ್ಯ ರಸ್ತೆ, ಜಯನಗರ ೪ ನೇ ಬಡಾವಣೆ
ಬೆಂಗಳೂರು-೧೧

ತಮಗೆಲ್ಲರಿಗೂ ಆದರದ ಸ್ವಾಗತ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಪ್ರಸನ್ನ: ೯೪೪೮೩ ೭೧೭೧೪ [94483 71714]
ಬದ್ರಿನಾರಾಯಣ: ೯೮೮೬೦ ೬೬೬೩೦ [98860 66630]
ನರೇಂದ್ರ ಕುಮಾರ್: ೯೩೪೨೫ ೩೬೫೫೧ [93425 36551]

*Click on image to read the invitation

Wednesday, April 9, 2008

ಪ್ರಕಟಣೆ-೫



ಮಾನ್ಯರೆ,
ನಮಸ್ಕಾರಗಳು. ಛಂದ ಪುಸ್ತಕ ತನ್ನ ೩ ಹೊಸ ಪುಸ್ತಕಗಳನ್ನು ನಿಮಗೆ ಕೊಡಲು ಖುಶಿಯಿಂದ ತಯಾರಾಗಿದೆ. ಪ್ರತಿ ವರ್ಷದಂತೆ ಈ ಸಲವೂ ಹೊಸ ಲೇಖಕರ ೩ ಕೃತಿಗಳನ್ನು ಛಂದದಿಂದ ಪ್ರಕಟಿಸುತ್ತಿದ್ದೇವೆ.


ಊರ ಒಳಗಣ ಬಯಲು ಡಾ. ವಿನಯಾ (೨೦೦೭ನೇ ಸಾಲಿನ ಛಂದ ಪುಸ್ತಕ ಬಹುಮಾನ ಪಡೆದ ಕಥಾಸಂಕಲನ)

ರಾಗಿಮುದ್ದೆ ರಘುನಾಥ ಚ ಹ (ಲಲಿತ ಪ್ರಬಂಧಗಳ ಸಂಕಲನ)

ಮದ್ಯಸಾರ ಅಪಾರ (ನೈಂಟಿ ಹನಿಗಳು)


ಈ ೩ ಪುಸ್ತಕಗಳನ್ನು ಇದೇ ೧೩ ರಂದು, ಭಾನುವಾರ ಬೆಳಿಗ್ಗೆ ೧೦:೩೦ ಕ್ಕೆ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ವರ್ಡ ಕಲ್ಚರ ನಲ್ಲಿ ಬಿಡುಗಡೆ ಮಾಡಲಿದ್ದೇವೆ.
ಮುಖಪುಟಗಳಿಗೆ ಇಲ್ಲಿ ಕ್ಲಿಕ್ಕಿಸಿ:http://www.raghuapara.blogspot.com/

ದಯವಿಟ್ಟು ಬನ್ನಿ.

ವಂದನೆಗಳು
--ವಸುಧೇಂದ್ರ

ದಿನ: ೧೩ ಎಪ್ರಿಲ್, ೨೦೦೮ ಭಾನುವಾರ
ಸಮಯ: ಬೆಳಿಗ್ಗೆ ೧೦:೩೦
ಸ್ಥಳ: ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ
ವಾಡಿಯಾ ರಸ್ತೆ
ಬಸವನಗುಡಿ . ಬೆಂಗಳೂರು

*Click on image to read the invitation

Monday, April 7, 2008

ಪ್ರಕಟಣೆ-೪

'ಶಿಶು ಸಾಹಿತ್ಯ' ಸ್ಪರ್ಧೆ

ಸದಾನಂದ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬೈ ಹಾಗೂ ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ ಇವರುಗಳು ಜಂಟಿಯಾಗಿ ಜಿ.ಪಿ ರಾಜರತ್ನಂ ಶಿಶು ಸಾಹಿತ್ಯ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.

ಮಕ್ಕಳಿಗಾಗಿ ರಚಿತವಾದ ಕತೆ-ಕಾವ್ಯ-ನಾಟಕಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಸ್ಪರ್ಧೆಗೆ ಕಳುಹಿಸುವ ಬರಹಗಳು ಇಲ್ಲಿಯವರೆಗೆ ಯಾವುದೇ ಬಹುಮಾನಕ್ಕೆ ಆಯ್ಕೆಯಾಗಿರಬಾರದು.

ಆಯ್ಕೆಯಾದ ಬರಹಕ್ಕೆ ೫ ಸಾವಿರ ರೂಪಾಯಿ ಬಹುಮಾನ ನೀಡಲಾಗುವದು. ಸಂಸ್ಥೆಯು ಪ್ರಶಸ್ತಿಗಳಿಸಿದ ಬರಹವನ್ನು ಪ್ರಕಟಿಸುವ ಹಕ್ಕನ್ನು ಪಡೆದಿರುತ್ತದೆ.

ಹಸ್ತಪ್ರತಿಯನ್ನು ಕಳುಹಿಸುವ ವಿಳಾಸ:
ಡಾ.ಗಣೇಶ್.ಎನ್.ಉಪಾಧ್ಯ.
ಮುಖ್ಯಸ್ಥರು,ಕನ್ನಡ ವಿಭಾಗ,
ಮುಂಬೈ ವಿಶ್ವವಿದ್ಯಾಲಯ,
ವಿದ್ಯಾನಗರಿ ಕ್ಯಾಂಪಸ್,ಕಳಿನಾ
ಮುಂಬೈ-೪೦೦೦೯೮

ಕೊನೆಯ ದಿನಾಂಕ: ಜೂನ್ ೧೫, ೨೦೦೮

ಪ್ರಕಟಣೆ-೩

ಪುಸ್ತಕ ಬಿಡುಗಡೆ
ಹಾಸ್ಯಸಾಹಿತಿ ಶ್ರೀ.ರಾಮನಾಥ್ ವಿರಚಿತ 'ತುಂಟ ತೇಜ ೧೦೮ ಹೇಳಿದ' ಪುಸ್ತಕ ಬಿಡುಗಡೆ ಕಾರ್ಯಕ್ರಮವು ಇಂದು ೦೮/೦೪/೨೦೦೮ ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಬೆಂಗಳೂರುನಲ್ಲಿ ಏರ್ಪಡಿಸಿದ್ದಾರೆ.
ಎಚ್. ದುಂಡಿರಾಜ್ ಈ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.

ಸ್ಥಳ: ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್
ರಾಜೇಂದ್ರ ಸಭಾಂಗಣ
ಜೆ.ಎಸ್.ಎಸ್ ವಿದ್ಯಾ ಸಂಸ್ಥೆಗಳ ಸಮುಚ್ಚಯ
ಕನಕಪುರ ರಸ್ತೆ. ಬೆಂಗಳೂರು

ಸಮಯ: ಸಂಜೆ ೬ ಗಂಟೆ
ಅತಿಥಿಗಳು: ವೈ.ವಿ. ಗುಂಡೂರಾವ್, ದಿಬ್ಬೂರು ಸಿದ್ಧಲಿಂಗಪ್ಪ, ಡಾ.ಟಿ.ಎಸ್.ವಿಶ್ವನಾಥ್
ಅಧ್ಯಕ್ಷತೆ: ರಿಚರ್ಡ ಲೂಯಿಸ್

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"