Monday, June 2, 2008

ಪ್ರಕಟಣೆ-೧೭





ಆತ್ಮೀಯರೆ,
ಸೃಜನಶೀಲತೆಯ ಹುಡುಕಾಟದಲ್ಲಿ ತಿಂಗಳ ಪತ್ರಿಕೆ 'ಚೈತ್ರರಶ್ಮಿ'ಯ ಭಾವಯಾನಕ್ಕೆ ನಾಲ್ಕು ವರ್ಷ ತುಂಬಿದ ಸಂಭ್ರಮ. ಸಾಹಿತ್ಯ, ಸಂಸ್ಕೃತಿ,ಸೃಜನಶೀಲತೆ,ದೇಶಭಕ್ತಿ ಮುಂತಾದ ಸದ್ವಿಚಾರಗಳ ಚಿಂತನ-ಮಂಥನ ಆಶಯದೊಂದಿಗೆ, ಅವಕಾಶವಂಚಿತ ಗ್ರಾಮೀಣ ಪ್ರತಿಭಾವಂತರಿಗೆ ವೇದಿಕೆಯಾಗುವ ಕನಸಿನೊಂದಿಗೆ 'ಚೈತ್ರರಶ್ಮಿ' ಕ್ರಿಯಾಶೀಲವಾಗಿ ಮುನ್ನಡೆದಿದೆ.

'ಚೈತ್ರರಶ್ಮಿ' ಪತ್ರಿಕೆಗೆ ನಾಲ್ಕು ತುಂಬುವ ಈ ಸಂಭ್ರಮದ ಕ್ಷಣಗಳಲ್ಲಿ ನಾವೆಲ್ಲಾ ಒಂದೆಡೆ ಸೇರಬೇಕು ಎಂಬ ಬಯಕೆ ನಮ್ಮೆಲ್ಲರದು.

ಬರುವ ಜೂನ್ ೮ ರ ಭಾನುವಾರ ಸಂಜೆ ಬೆಂಗಳೂರಿನ ಜೆ.ಸಿ.ರಸ್ತೆಯ 'ನಯನ ಸಭಾಂಗಣ'ದಲ್ಲಿ ಕಾರ್ಯಕ್ರಮವಿದೆ. ಅಲ್ಲಿ 'ವಾರ್ಷಿಕ ಸಂಚಿಕೆಯ ಬಿಡುಗಡೆ'ಯ ಜೊತೆಗೆ ಚೈತ್ರರಶ್ಮಿಯ ವೆಬ್ ಸೈಟ್ ಅನಾವರಣ ಹಾಗೂ ಯಾವುದೇ ಪ್ರಚಾರವಿಲ್ಲದೆ ನಿಸ್ವಾರ್ಥವಾಗಿ ಸಮಾಜದ ಕೆಲಸ ಮಾಡುತ್ತಿರುವ ನಾಲ್ವರು ಮಹನೀಯರು ಮತ್ತು ನಾಲ್ಕು ಸಂಘಟನೆಗಳಿಗೆ ಚೈತ್ರರಶ್ಮಿಯ ಗೌರವ ಸಮರ್ಪಣೆ. ಜತೆಗೊಂದಿಷ್ಟು ಮನತಣಿಸುವ ಕಾರ್ಯಕ್ರಮ.

ಚೈತ್ರರಶ್ಮಿಯ ನಾಲ್ಕನೇ ವರ್ಷಸಂಭ್ರಮಕ್ಕೆ ಸಾಕ್ಷಿಯಾಗಲು ನೀವು ನಮ್ಮ ಜತೆಗಿರಬೇಕು ಎಂಬುದು ನಮ್ಮೆಲ್ಲರ ಕೋರಿಕೆ,ಆರಿಕೆ,ಹಾರೈಕೆ.

ದಿನಾಂಕ: ೮ ನೇ ಜೂನ್ ಭಾನುವಾರ
ಸಮಯ: ಸಂಜೆ ೪.೩೦ ಕ್ಕೆ
ಸ್ಥಳ: ನಯನ ಸಭಾಂಗಣ,
'ಕನ್ನಡ ಭವನ' (ರವೀಂದ್ರ ಕಲಾಕ್ಷೇತ್ರದ ಪಕ್ಕ)
ಜೆ.ದಿ ರಸ್ತೆ. ಬೆಂಗಳೂರು.

ನಮ್ಮೊಂದಿಗೆ:
ಶ್ರೀ ವಸುಧೇಂದ್ರ (ಖ್ಯಾತ ಕನ್ನಡ ಕಥೆಗಾರರು)
ಶ್ರೀ ಚಕ್ರವರ್ತಿ ಸೂಲಿಬೆಲೆ (ಬರಹಗಾರರು ಮತ್ತು ಅಂಕಣಕಾರರು)
ಶ್ರೀ ಎಂ.ಜಿ.ಅರುಣ(ಪ್ರಕಾಶಕರು 'ಸಾಹಿತ್ಯ ಭಂಡಾರ')

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಶ್ರೀ ರಾಮಚಂದ್ರ ಹೆಗಡೆ (ಸಂಪಾದಕರು 'ಚೈತ್ರ ರಶ್ಮಿ')
ಮೊಬೈಲ್:೯೯೮೬೩೭೨೫೦೩(9986372503)

*Click on image to read the invitation

Sunday, June 1, 2008

ಪ್ರಕಟಣೆ-೧೬

ನಮಸ್ಕಾರ , ನಿಮಗೊಂದು ಆಹ್ವಾನ ಪತ್ರಿಕೆ..

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english
http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ 'ಬ್ಲಾಗೀ ಮಾತುಕತೆ' ನಡೆಸುವ ಉದ್ದೇಶವೂ ಇದೆ.

ದಿನಾಂಕ: ೮ ನೇ ಜೂನ್ ೨೦೦೮ , ರವಿವಾರ
ಸ್ಥಳ: ಕ್ರೈಸ್ಟ್ ಕಾಲೇಜು,
ಬೆಂಗಳೂರು ಡೇರಿ ಹತ್ತಿರ. ಬೆಂಗಳೂರು.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"