Saturday, April 26, 2008

ಪ್ರಕಟಣೆ ೧೩

ಅಂಕಿತ ಪುಸ್ತಕ: ಇಂಡಿಯನ್ ಇನ್ಸ್ಟಿತ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ. ಪಿ. ವಾಡಿಯಾ ರಸ್ತೆ, ಬಸವನಗುಡಿ.
ಎಚ್. ಡುಂಡಿರಾಜ್ ಅವರ 'ಬಾರಯ್ಯ ಲಂಬೋದರ' ಪುಸ್ತಕ ಬಿಡುಗಡೆ - ಪತ್ರಕರ್ತ ವಿಶ್ವೇಶ್ವರ ಭಟ್ ಅವರಿಂದ. ಅತಿಥಿ - ಹಾಸ್ಯ ಸಾಹಿತಿ ಎಂ. ಎಸ್. ನರಸಿಂಹಮೂರ್ತಿ. ಅಧ್ಯಕ್ಷತೆ - ಸಂಶೋಧಕ ಶ್ರೀನಿವಾಸ್ ಹಾವನೂರು. ಬೆಳಿಗ್ಗೆ ೧೦.೩೦ ಕ್ಕೆ.

Thursday, April 24, 2008

ಪ್ರಕಟನೆ ೧೨

ಜನಾದೇಶ ಸಂಸ್ಥೆ : ಸಭಾಂಗಣ ಗಾಂಧೀ ಭವನ, ಕುಮಾರ ಕೃಪಾ ರಸ್ತೆ.
"ಪ್ರಜಾಪ್ರಭುತ್ವ, ಚುನಾವಣೆಗಳು ಮತ್ತು ಪ್ರಜ್ಜ್ಞ್ಯಾವಂತರ ಪಾತ್ರ" ಕುರಿತು ಚರ್ಚೆ.
ಪಾಲ್ಗೊಳ್ಳುವವರು - ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್ ವೆಂಕಟಾಚಲ, ಸಾಹಿತಿ ಪ್ರೊ. ಸಾ. ಶಿ. ಮರುಳಯ್ಯ, ಪ್ರೊ ಕೆ. ವಿ. ರಾಜು, ಕಿರುತೆರೆ ನಿರ್ದೇಶಕ ಟಿ. ಎನ್. ಸೀತಾರಾಂ, ಹಿರಿಯ ವಕೀಲ ಸಿ. ಎಚ್. ಹನುಮಂತರಾಯ ಮತ್ತಿತರರು.

ವೇಳೆ : ಸಂಜೆ ೬ ಕ್ಕೆ.

Tuesday, April 22, 2008

ಪ್ರಕಟಣೆ-೧೧

ನಟಸಾರ್ವಭೌಮ ಪದ್ಮಭೂಷಣ ದಾದಾಸಾಹೇಬ ಫಾಲ್ಕೆ ಪುರಸ್ಕೃತ ಡಾ.ರಾಜ್ ರವರ ೮೦ ನೇ ಹುಟ್ಟುಹಬ್ಬದ ನಿಮಿತ್ತ ಸ್ಟಾನ್ ಫೋರ್ಡ ರೇಡಿಯೋ ೯೦.೧ FM KZSU ಕನ್ನಡ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಹಾಗೆಯೇ ಕನ್ನಡ ಹೊಸ ವರ್ಷ ಸರ್ವಧಾರಿ ಸಂವತ್ಸರವನ್ನು ಸ್ವಾಗತಿಸಲು ನಮ್ಮೊಂದಿಗೆ ಸೇರಿಕೊಳ್ಳಿ.
ಕೇಳುಗರು ತಮ್ಮ ಅನಿಸಿಕೆಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಳ್ಳಬಹುದು.

ದಿನಾಂಕ: ೨೩ ನೇ ಏಪ್ರಿಲ್ ೨೦೦೮ ಬುಧವಾರ
ಸಮಯ: ಮುಂಜಾನೆ ೭.೩೦ ರಿಂದ ೮.೩೦ ರವರೆಗೆ [PST]
ಸಂಜೆ ೮ ರಿಂದ ೯ ರವರೆಗೆ [IST]
ಸಂಚಾಲಕರು: ಮಧು ಕೃಷ್ಣಮೂರ್ತಿ

ಇಂಟರನೆಟ್ಟಿನಲ್ಲೂ ಈ ಕಾರ್ಯಕ್ರಮವನ್ನು ಕೇಳಿಸಿಕೊಳ್ಳಬಹುದು
http://www.itsdiff.comRadio [in SF Bay area]

ಹಳೆಯ ಕಂತುಗಳನ್ನು ಕೇಳಲು ಭೇಟಿ ನೀಡಿ
http://www.itsdiff.com/Kannada.html

Sunday, April 20, 2008

ಪ್ರಕಟಣೆ-೧೦

ರಂಗಚೇತನರವರಿಂದ

'ಸಿಜಿಕೆ ಕನಸಿನ ಜನಪರ ಸಂಸ್ಕೃತಿ ಉತ್ಸವ'ಕ್ಕೆ ಆಹ್ವಾನ.

ನಿರಂತರವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಜನಪದ ಮೇಳ ಹಾಗೂ ನಾಟಕೋತ್ಸವ.

ಉದ್ಘಾಟನೆ: ಡಾ. ವಿಜಯಾ
ಅಧ್ಯಕ್ಷತೆ: ಮನು ಬಳಿಗಾರ್
ಅತಿಥಿಗಳು: ಸಿ.ಜಿ.ಶ್ರೀನಿವಾಸನ್ ಮತ್ತು ಕೆ.ಎಚ್.ಪುಟ್ಟಸ್ವಾಮಿಗೌಡ
ದಿನಾಂಕ: ೨೧/೦೪/೨೦೦೮ ಸೋಮವಾರ
ಸಮಯ: ಸಂಜೆ ೬ ಕ್ಕೆ
ಸ್ಥಳ: ರವೀಂದ್ರ ಕಲಾಕ್ಷೇತ್ರ . ಜೆ.ಸಿ. ರಸ್ತೆ. ಬೆಂಗಳೂರು.

ನಂತರ ಸಂಜೆ ೭ ಕ್ಕೆ ಕೇಶವರೆಡ್ಡಿ ಹಂದ್ರಾಳರ ಸಣ್ಣ ಕತೆ 'ಜೇನು ಹುಡುಗಿ' ನಾಟಕ ಪ್ರದರ್ಶನವೂ ಇದೆ.

೨೨/೦೪/೨೦೦೮ ಮಂಗಳವಾರ ಸಂಜೆ ೭ ಕ್ಕೆ
ರಂಗನಿರಂತರ ತಂಡದಿಂದ ಲಕ್ಷ್ಮಿಪತಿ ಕೋಲಾರ ಅವರ 'ಅಲ್ಲಮನ ಬಯಲಾಟ'
ನಿರ್ದೇಶನ: ಡಾ. ಕೆ ರಾಮಕೃಷ್ಣಯ್ಯ

೨೩/೦೪/೨೦೦೮ ಬುಧವಾರ ಸಂಜೆ ೭ ಕ್ಕೆ
ಸಾಣೇಹಳ್ಳಿ ಶಿವಸಂಚಾರ ತಂಡದವರಿಂದ ನಿಸರ್ಗ ಪ್ರೀಯ ಅವರ 'ನಿಜಗುಣ ಶಿವಯೋಗಿ'
ನಿರ್ದೇಶನ: ನಟರಾಜ ಹೊನ್ನವಳ್ಳಿ

೨೪/೦೪/೨೦೦೮ ಗುರುವಾರ
ಕವಿಗೋಷ್ಠಿ ಹಾಗೂ 'ನಮ್ಮೆಲ್ಲರ ಬುಧ್ಧ' ನಾಟಕ

೨೫/೦೪/೨೦೦೮ ಶುಕ್ರವಾರ
'ಅಲ್ಲಮ' ನಾಟಕ

೨೬/೦೪/೨೦೦೮ ಶನಿವಾರ
ಜಾನಪದ ಮೇಳ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಮೇಲಿನ ಎಲ್ಲ ಕಾರ್ಯಕ್ರಮಗಳು ನಡೆಯುವ ಸ್ಥಳ:ರವೀಂದ್ರ ಕಲಾಕ್ಷೇತ್ರ . ಜೆ.ಸಿ. ರಸ್ತೆ. ಬೆಂಗಳೂರು.

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"