Tuesday, April 15, 2008

ಪ್ರಕಟಣೆ-೯




೮/೧೫

ಅಂದ್ರೆ ಆಗಷ್ಟ ೧೫
ಅಂದ್ರೆ ನಮ್ಮ ಸ್ವಾತಂತ್ರ್ಯದ ದಿನ

ಎಲ್ಲೋ ಓದಿದ್ದ ನೆನಪು. ಮೂರನೇ ಮಹಾಯುಧ್ಧವಾದರೆ ಅದು ಧರ್ಮಗಳ ನಡುವೆ ಎಂದು. ಹಾಗೆಯೇ ನಾಲ್ಕನೇ ಮಹಾಯುಧ್ಧದ ರೀತಿ ಹೇಗಿರುತ್ತೆ ಎಂದು ಕೇಳಿದ್ದಕೆ ಅದು ಕಲ್ಲು-ಗುರಾಣಿಗಳಿಂದ ಅಂತ ನಗೆಯಾಡಿ ಬರೆದಿದ್ದರು.

ಇಂದು ಜಗತ್ತನ್ನು ಬಹುಮುಖ್ಯವಾಗಿ ಕಾಡುತ್ತಿರುವ ಮತೀಯವಾದ/ಧರ್ಮಾಂಧತೆ ಕುರಿತು ವಿಚಾರಕ್ಕೊಳಪಡಿಸುವ ನಾಟಕ ೮/೧೫ ಋತ್ವಿಕ್ ಸಿಂಹರ ನಿರ್ದೇಶನದಲ್ಲಿ ೧೬-೦೪-೨೦೦೮ ರಿಂದ ೨೦-೦೪-೨೦೦೮ ರವರೆಗೆ ರಂಗಶಂಕರದಲ್ಲಿ ನಡೆಯುತ್ತಿದೆ.

ಇದು ಚರ್ಚೆಯಂಥದ್ದಲ್ಲ, ಉಪನ್ಯಾಸವೂ ಅಲ್ಲ.
ಇಲ್ಲಿ ಪ್ರೇಕ್ಷಕನೇ ಪಾತ್ರವಾಗುತ್ತಾನೆ. ಇದೊಂದು ಮತೀಯತೆಯ ಆರ್ಚಕರ ಮತ್ತು ಅನುಭವಿಸುವವರ ನಡುವಿನ ಸಂಭಾಷಣೆ. ದ್ವೇಷದ ಜ್ವಾಲೆಗಳು ಹೂಡುವ ಕತ್ತಲೆಗಳಲ್ಲಿ ಶಾಂತಿಯ ಬೆಳಕನ್ನು ಚೆಲ್ಲುವ ಆಶಾಕಿರಣ.

ನಾಟಕದ ಕಥೆ ಹೀಗಿದೆ:
ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ [ICCR] ಭಾರತದ ಸ್ವಾತಂತ್ರ್ಯೋತ್ಸವದ ದಿನ 'ಸೂಫಿ ಸಂಜೆ' ಎಂಬ ಕಾರ್ಯಕ್ರಮ ನಡೆಯುತಿರುತ್ತೆ. ಪಾಕಿಸ್ತಾನದ ಸಾಂಸ್ಕೃತಿಕ ಮಂತ್ರಿ ಭಾರತಕ್ಕೆ ಆಗಮಿಸಿರುತ್ತಾರೆ. ಆ ಸಾಂಸ್ಕೃತಿಕ ಸಂಜೆಯನ್ನು ಉಗ್ರವಾದಿಗಳು ಆಕ್ರಮಿಸುತ್ತಾರೆ. ನಾಟಕದ ಪ್ರೇಕ್ಷಕರೇ ಸೂಫಿ ಸಂಜೆಯ ಪ್ರೇಕ್ಷಕರಾಗಿರುತ್ತಾರೆ. ಆ ಸೂಫಿ ಕಾರ್ಯಕ್ರಮವನ್ನು ಹೈ-ಜಾಕ್ ಮಾಡಿದಾಗ ಅಲ್ಲಿ ಪ್ರೇಕ್ಷಕನೇ ಬಂಧಿಯಾಗಿರುತ್ತಾನೆ.

ಇಂತಹ ಒಂದು ಕ್ರಿಯಾತ್ಮಕ ನಾಟಕಕ್ಕೆ ರಂಗಶ ಶಂಕರ ಮತ್ತು ವೇದಿಕೆ ಫೌಂಡೆಶನ್ ಆಹ್ವಾನಿಸುತ್ತದೆ.

ನಾಟಕ: ೮/೧೫
ನಿರ್ದೇಶನ: ಋತ್ವಿಕ್ ಸಿಂಹ
ಸ್ಥಳ: ರಂಗಶಂಕರ. ೩೬/೨, ೮ನೇ ಅಡ್ಡರಸ್ತೆ. ಜೆ.ಪಿ.ನಗರ - ೨ ನೇ ಹಂತ
ಆಟಗಳು:
೧೬/೦೪/೨೦೦೮ ರಿಂದ ೧೯/೦೪/೨೦೦೮ ರ ವರೆಗೆ ಸಂಜೆ ೭.೩೦ ಕ್ಕೆ
೨೦/೦೪/೨೦೦೮ ರವಿವಾರ ರಂದು ಎರಡು ಆಟಗಳು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
೦೮೦-೨೬೭೨೪೩೭೩ [080-2672 4373]
೯೮೪೫೮೦೫೪೪೨ [98458 05442]

ಪ್ರಕಟಣೆ-೮

ಗೆಜ್ಜೆಹೆಜ್ಜೆಗೆ ೨೫ ತುಂಬುತ್ತಿರುವ ಸಂಭ್ರಮದಲ್ಲಿ ಮೈಸೂರು ರಮಾನಂದ ಅವರ ರಂಗಕೃತಿ "ಕಾಣೆಯಾಗಿದ್ದಾನೆ" ಲೋಕಾರ್ಪಣೆ ಮತ್ತು ಪ್ರದರ್ಶನ ಕಾರ್ಯಕ್ರಮವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ.

ಪುಸ್ತಕ ಪ್ರೇಮಿಗಳಿಗೆ ಮತ್ತು ರಂಗಪ್ರೇಮಿಗಳಿಗೆ ಪ್ರೀತಿಯ ಆಹ್ವಾನವಿದೆ.

ಕೃತಿ: ಕಾಣೆಯಾಗಿದ್ದಾನೆ
ಉದ್ಘಾಟನೆ: ಎ.ವಿ ನಾಗರಾಜು
ಕೃತಿ ಬಿಡುಗಡೆ: ಡಿಂಗ್ರಿ ನಾಗರಾಜ್
ಕೃತಿ ಪರಿಚಯ: ಪ್ರೋ| ರವೀಂದ್ರ ಕೊಪ್ಪರ್
ಅಧ್ಯಕ್ಷತೆ: ವಿ.ರಾಮಮೂರ್ತಿ

ದಿನಾಂಕ: ೧೫/೦೪/೨೦೦೮ ಮಂಗಳವಾರ
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಬೆಂಗಳೂರು
ಸಮಯ: ಸಂಜೆ ೬.೩೦ ಕ್ಕೆ

Monday, April 14, 2008

ಪ್ರಕಟಣೆ-೭

ಸಂಗೀತ ಆರಾಧಕರೆ,

ಬಸವನಗುಡಿಯ ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ ನಲ್ಲಿ ಸುಗಮ ಸಂಗೀತ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಗಾಯಕರು: ಪೂಜಾ ಎಂ.ಟಿ
ದಿನಾಂಕ: ೧೫/೦೪/೨೦೦೮
ಸಮಯ: ಸಂಜೆ ೬ ಗಂಟೆ
ಸ್ಥಳ: ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ
ವಾಡಿಯಾ ರಸ್ತೆ
ಬಸವನಗುಡಿ, ಬೆಂಗಳೂರು.

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"