Monday, April 7, 2008

ಪ್ರಕಟಣೆ-೪

'ಶಿಶು ಸಾಹಿತ್ಯ' ಸ್ಪರ್ಧೆ

ಸದಾನಂದ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬೈ ಹಾಗೂ ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ ಇವರುಗಳು ಜಂಟಿಯಾಗಿ ಜಿ.ಪಿ ರಾಜರತ್ನಂ ಶಿಶು ಸಾಹಿತ್ಯ ಸ್ಪರ್ಧೆಯನ್ನು ಆಯೋಜಿಸಿದ್ದಾರೆ.

ಮಕ್ಕಳಿಗಾಗಿ ರಚಿತವಾದ ಕತೆ-ಕಾವ್ಯ-ನಾಟಕಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಸ್ಪರ್ಧೆಗೆ ಕಳುಹಿಸುವ ಬರಹಗಳು ಇಲ್ಲಿಯವರೆಗೆ ಯಾವುದೇ ಬಹುಮಾನಕ್ಕೆ ಆಯ್ಕೆಯಾಗಿರಬಾರದು.

ಆಯ್ಕೆಯಾದ ಬರಹಕ್ಕೆ ೫ ಸಾವಿರ ರೂಪಾಯಿ ಬಹುಮಾನ ನೀಡಲಾಗುವದು. ಸಂಸ್ಥೆಯು ಪ್ರಶಸ್ತಿಗಳಿಸಿದ ಬರಹವನ್ನು ಪ್ರಕಟಿಸುವ ಹಕ್ಕನ್ನು ಪಡೆದಿರುತ್ತದೆ.

ಹಸ್ತಪ್ರತಿಯನ್ನು ಕಳುಹಿಸುವ ವಿಳಾಸ:
ಡಾ.ಗಣೇಶ್.ಎನ್.ಉಪಾಧ್ಯ.
ಮುಖ್ಯಸ್ಥರು,ಕನ್ನಡ ವಿಭಾಗ,
ಮುಂಬೈ ವಿಶ್ವವಿದ್ಯಾಲಯ,
ವಿದ್ಯಾನಗರಿ ಕ್ಯಾಂಪಸ್,ಕಳಿನಾ
ಮುಂಬೈ-೪೦೦೦೯೮

ಕೊನೆಯ ದಿನಾಂಕ: ಜೂನ್ ೧೫, ೨೦೦೮

No comments:

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"