Saturday, April 5, 2008

ಪ್ರಕಟಣೆ-೨


ಬನವಾಸಿ ಬಳಗ

ಗೆಳೆಯರೇ,

ಕರ್ನಾಟಕದ ಮೂಲೆ ಮೂಲೆಗಳಲ್ಲಿ ಹಾಗೂ ವಿಶ್ವದ ಎಲ್ಲೆಡೆ ನೆಲೆಸಿರುವ ಎಲ್ಲ ಆತ್ಮೀಯ ಕನ್ನಡಿಗರೇ, ಇದೋ ಬಂದಿದೆ ನಾವೆಲ್ಲರೂ ಒಂದೆಡೆ ಸೇರುವ ಒಂದು ಸುವರ್ಣ ಅವಕಾಶ !!

ನೀವು ಒಪ್ತೀರೋ ಬಿಡ್ತೀರೋ, ನಮ್ಮ ಸಮಾಜ ನಮ್ಮನ್ನೆಲ್ಲಾ ಬುಧ್ಧಿವಂತರು ಅಂತ ನಮಗೆ ಗೌರವ ಆದರ ನೀಡಿದೆ. ಅದಕ್ಕೆ ಪ್ರತಿಯಾಗಿ ಕನ್ನಡ-ಕನ್ನಡಿಗ-ಕರ್ನಾಟಕಕ್ಕಾಗಿ ನಾವೇನು ಮಾಡಬಹುದು ಎಂಬ ಕುತೂಹಲ ನಿಮಗಿದೆಯೇ? ನಮಗೂ ಇದೆ...

ಹಾಂ.. ಏನಂದ್ರಿ? ಈಗಾಗಲೇ ನೀವು ಹಲವು ಕೆಲಸಗಳನ್ನು ಮಾಡ್ತಿದೀರಾ? ಸರಿ ಮತ್ತೆ. ಇನ್ಯಾಕೆ ತಡ? ಬನ್ನಿ ಎಲ್ಲರೂ ಸೇರಿ ಈ ಕನ್ನಡಿಗರ ಕೂಟದಲ್ಲಿ ಅವನ್ನು ಹಂಚಿಕೊಳ್ಳೋಣ. ಇನ್ನೂ ಫಲಕಾರಿ ಮಾಡೋಣ. ಈ ಮೂಲಕ, ಬನವಾಸಿ ಬಳಗದ ಪರವಾಗಿ ಈ ಕೂಟಕ್ಕೆ ನಿಮ್ಮೆಲ್ಲರನ್ನು ಸ್ವಾಗತಿಸುತ್ತಿದ್ದೇವೆ.

ಹಾಗೇ, ಈ ಮಾರ್ನಿಂಗ್ ಶೋ ಗೆ ನಿಮ್ಮ ಗೆಳೆಯರನ್ನೂ ಕರ್ಕೊಂಡು ಬನ್ನಿ

ದಿನ: ೧೩ ಎಪ್ರಿಲ್, ೨೦೦೮ ಭಾನುವಾರ
ಸಮಯ: ೧೧ ರಿಂದ ೧ ಗಂಟೆ
ಜಾಗ: ಮಿಥಿಕ್ ಸೋಸೈಟಿ, ಯವನಿಕಾ ಮುಂಭಾಗ,ನೃಪತುಂಗ ರಸ್ತೆ, ಬೆಂಗಳೂರು
ಹೆಚ್ಚಿನ ಮಾಹಿತಿಗಾಗಿ: banavasibalaga@gmail.com

*Click on image to read the invitation

Friday, April 4, 2008

ಪ್ರಕಟಣೆ-೧


ಪ್ರೀತಿಯ ಕನ್ನಡಿಗರೇ,

'ಗುರುಕುಲ ದರ್ಶನ' ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಆತ್ಮೀಯ ಆಹ್ವಾನವಿದೆ ಪ್ರಬೋಧಿನಿ ಗುರುಕುಲವರಿಂದ*.

ವಿಷಯ: ಆಧುನಿಕ ಯುಗದಲ್ಲಿ ಭಾರತೀಯ ಶಿಕ್ಷಣದ ಮಹತ್ವ

ದಿನ: ೬ ಎಪ್ರಿಲ್, ೨೦೦೮ ಭಾನುವಾರ
ಸಮಯ: ಬೆಳಿಗ್ಗೆ ೯.೪೫ ರಿಂದ ಮಧ್ಯಾಹ್ನ ೧.೩೦ ರವರೆಗೆ
ಸ್ಥಳ: ಆರ್.ವಿ. ಟೀಚರ್ಸ್ ಕಾಲೇಜು ಸಭಾಂಗಣ.೨ನೇ ಬ್ಲಾಕ್ ಜಯನಗರ ಬೆಂಗಳೂರು

ಹೆಚ್ಚಿನ ಮಾಹಿತಿಗಾಗಿ:
ಪ್ರಬೋಧಿನಿ ಗುರುಕುಲ
ಹರಿಹರಪುರ, ಚಿಕ್ಕಮಗಳೂರು ಜಿಲ್ಲೆ
ದೂರವಾಣಿ: ೦೮೨೬೫-೨೭೪೨೩೨, ೯೪೪೮೦ ೦೭೦೦೫ , ೯೩೪೧೨ ೪೯೬೫೧
[08265-274232, 94480 07005, 93412 49651]

*Click on image to read the invitation

Thursday, April 3, 2008

ಆರಂಭಕ್ಕೆ...





"ಮೊನ್ನೆ ಎಲ್ಲೋ ಬ್ಲಾಗಿಗರ ಕೂಟ ಇತ್ತಂತೆ...... ಅದೆಲ್ಲೋ ಡಿ.ವಿ.ಜಿ ಯವರ ಹುಟ್ಟುಹಬ್ಬದ ಕಾರ್ಯಕ್ರಮ ಆಯಿತಂತೆ.... ಜೋಗಿಯವರ ಪುಸ್ತಕ ಬಿಡುಗಡೆಗೆ ನೀವು ಹೋಗಿದ್ರಾ? ಯಾವಾಗ ಎಲ್ಲಿ ನಡೆಯಿತು?..... ಮೈಸೂರ ಮಲ್ಲಿಗೆ ನಾಟಕ ನೋಡುವಾಸೆ ತುಂಬಾ ಇತ್ತು, ಆದ್ರೆ ಅದ್ಯಾವಾಗ ಪ್ರಸಾರ ಆಯ್ತೋ ಗೊತ್ತೇ ಆಗಲಿಲ್ಲ " ಹೀಗೆಯೇ ಇನ್ನೂ ಅನೇಕ ಅಯ್ಯೋಗಳ ಪಟ್ಟಿ ಬೆಳೆಯುತ್ತೆ. ಇಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವು ನಮಗೆ ಗೊತ್ತಾಗದೇ ಹೋದುದಕ್ಕಾಗಿ ಕಳೆದುಕೊಂಡಿದ್ದೇವೆ.


ಈ ಕೊರಗನ್ನು ನೀಗಿಸಲು ಏನು ಮಾಡಬಹುದು ಎಂದು ತಲೆ ಕೆರೆದುಕೊಂಡಾಗ ಹೊಳೆದಿದ್ದೇ 'ಇದೊಂದು ಪ್ರಕಟಣೆ' ಎಂಬ ಬ್ಲಾಗ್.

www.prakatane.blogspot.com

ಬೆಂಗಳೂರಿನಲ್ಲೇ ಆಗಲಿ, ಕರ್ನಾಟಕದಲ್ಲೇ ಆಗಲಿ ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲೇ ಆಗಲಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಮ್ಮ 'ಇದೊಂದು ಪ್ರಕಟಣೆ' ಬ್ಲಾಗಿಗೆ ಕಳಿಸಿ. ನಾವು ಪ್ರಕಟಿಸುತ್ತೇವೆ.


ನೀವು ಮಾಡಬೇಕಾದುದಿಷ್ಟೇ. ನಿಮಗೆ ಯಾವುದಾದರೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿದಿದೆಯೇ prakatane@gmail.com ಗೆ ಒಂದು ಮಿಂಚಂಚೆ ಕಳಿಸಿ.
ನಿಮಗೆ ಈ ವಾರದಲ್ಲಿ/ವಾರಾಂತ್ಯದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿಯಬೇಕೆ? 'ಇದೊಂದು ಪ್ರಕಟಣೆಗೆ' ಭೇಟಿ ಕೊಡಿ.


ಇದು ನಿಮ್ಮಿಂದ ನಿಮಗಾಗಿ ನಿಮಗೋಸ್ಕರ ಹುಟ್ಟಿದ ಬ್ಲಾಗ್. ಇದರ ಜವಾಬ್ದಾರಿಯೂ ನಿಮ್ಮೆಲ್ಲರದೇ. ಈ ಬ್ಲಾಗು ನಡೆಯುವುದನ್ನು ಕಲಿಯುವವರೆಗೆ ನಾನು ನೋಡಿಕೊಳ್ಳುತ್ತೇನೆ. ಆಮೇಲೆ ಯಾರಾದರೂ ಕೈ ಜೋಡಿಸಬಹುದು.

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"