Friday, September 12, 2008

ಪ್ರಕಟಣೆ - ೨೯



ಛಂದ ಪುಸ್ತಕ ಸಂಭ್ರಮ

ಮಾನ್ಯರೆ,

ಕುಂವೀ ಕನ್ನಡ ಸಾಹಿತ್ಯ ಲೋಕ ಕಂಡ ವಿಶಿಷ್ಟ ಕತೆಗಾರ. ಬೆಚ್ಚಿ ಬೀಳಿಸುವ ಲೋಕವೊಂದನ್ನು ತನ್ನ ವಿಕಟ ನಿರೂಪಣೆಯಿಂದಲೇ ಬಿಚ್ಚಿಟ್ಟ ದಿಟ್ಟ ಕತೆಗಾರ. ಕತೆ ಹೇಳಲು ಎಂದೂ ಆಯಾಸಗೊಳ್ಳದ ಸೃಜನಶೀಲತೆಯ ಅಕ್ಷಯ ಪಾತ್ರೆ.

ಈ ಅಪರೂಪದ ಕತೆಗಾರನ ಜೊತೆ ಈ ಭಾನುವಾರದ ಸಂಜೆಯನ್ನು ಕಳೆಯಲು ಚಂದ ಪುಸ್ತಕವು ಅವಕಾಶ ಮಾಡಿ ಕೊಡುತ್ತಿದೆ. ಮಳೆಯ ನೆಪವೊಡ್ಡದೆ ದಯವಿಟ್ಟು ಬನ್ನಿ.

ದಿನಾಂಕ: ೧೪ ನೇ ಸೆಪ್ಟೆಂಬರ್ ೨೦೦೮ ಭಾನುವಾರ
ವೇಳೆ: ಸಂಜೆ ೩.೩೦ ಗೆ
ಸ್ಥಳ: ಎನ್.ಎಮ್.ಕೆ.ಆರ್.ವಿ. ಮಹಿಳಾ ಕಾಲೇಜು.
ಶಾಶ್ವತಿ ಸಭಾಂಗಣ
ಜಯನಗರ ೩ ನೇ ಬ್ಲಾಕ್.
ಬೆಂಗಳೂರು- ೧೧

ಹೆಚ್ಚಿನ ವಿವರಗಳಿಗೆ ಲಗತ್ತಿಸಿದ ಚಿತ್ರವನ್ನು ನೋಡಿ ಅಥವಾ ಈ ಲಿಂಕನ್ನು ಕ್ಲಿಕ್ಕಿಸಿ
http://raghuapara.blogspot.com/2008/09/blog-post_08.html

ನಿಮ್ಮ ನಿರೀಕ್ಷೆಯಲ್ಲಿ,
--ವಸುಧೇಂದ್ರ

No comments:

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"