Thursday, July 3, 2008

ಪ್ರಕಟಣೆ - ೨೧




ಮಾನ್ಯರೇ,
ಎಸ್.ಒ.ಎಸ್.ಮಕ್ಕಳ ಗ್ರಾಮದ ಸಹಾಯ ನಿಧಿಯ ಉದ್ದೇಶದಿಂದ ಭಾವನೆಗಳಿಗೆ ಬಣ್ಣದ ಚಿತ್ತಾರ ಬೆರಸಿ,ಒಡಮೂಡಿದ ಕಲಾಕೃತಿಗಳನ್ನು ಕಣ್ತುಂಬ ನೋಡಿ,ಮನತುಂಬಾ ಹರಸುವಿರೆಂಬ ಆಶಯದೊಂದಿಗೆ ನಿಮ್ಮನ್ನು ನಮ್ಮ ಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದ್ದೇನೆ.

ಚಿತ್ರ ಪ್ರದರ್ಶನ : ಸ್ತ್ರೀತ್ವದ ಚಿತ್ರ ವ್ಯಾಖ್ಯೆ
ಶಿಲ್ಪ ಕಲಾಕೃತಿಗಳ ಪ್ರದರ್ಶನ : ಬಾಲಕಾಂಡದ ಮೋಜು ಹಾಗೂ ಕಲ್ಪನೆ
ಉದ್ಘಾಟಕರು : ಶ್ರೀ ಕೆ.ವಿ. ಸುಬ್ರಮಣ್ಯಂ,
ಖ್ಯಾತ ವಿಮರ್ಶಕರು
ಅತಿಥಿಗಳು : ಶ್ರೀ ಎಂ. ಕೆ. ಲೋಕೇಶ್,
ನಿರ್ದೇಶಕರು,
ಎಸ್.ಓ.ಎಸ್. ಮಕ್ಕಳ ಗ್ರಾಮ.

ಜುಲೈ ೩ ರ, ಬೆಳಿಗ್ಗೆ ೧೧ ಗಂಟೆಗೆ
ಚಿತ್ರಕಲಾ ಪರಿಷತ್, ಗ್ಯಾಲರಿ -೧,
ಕುಮಾರ ಕೃಪ ರಸ್ತೆ, ಬೆಂಗಳೂರು-೫೬೦೦೦೧

ನನ್ನೊಂದಿಗೆ ಕುಂಚಕಲಾವಿದರಾದ ಸಿ.ಎಸ್.ಶಶಿಧರ್, ಜೆ. ಕಡೂರ್, ರಾಘ್ ಪುತ್ತೂರ್ ಹಾಗೂ ಶಿಲ್ಪಿ ಡಿ.ರಂಗಸ್ವಾಮಿ ನಿಮ್ಮ ಬರುವಿಕೆಗಾಗಿ ದಾರಿ ಕಾಯುತ್ತಿರುತ್ತೇವೆ.

ಪ್ರದರ್ಶನವು ದಿನಾಂಕ ೩ , ೪ , ೫ ಹಾಗೂ ೬ ರ ಜುಲೈ ೨೦೦೮ ಬೆಳಗ್ಗೆ ೧೦ ರಿಂದ ಸಂಜೆ ೭ ರ ವರೆಗೆ ತೆರೆದಿರುತ್ತದೆ.

--ನಿಮ್ಮವ,
ಪ್ರಮೋದ್. ಪಿ. ಟಿ
ಕುಂಚ-ಪ್ರಪಂಚ.
www.kuncha-prapancha.blogspot.com

No comments:

Disclaimer (ಮಿಸ್-ಕ್ಲೇಮರ್)

ಪ್ರಕಟಣೆಯನ್ನು ಕಳಿಸಿದವರಿಗೆ ಪತ್ರ ವ್ಯವಹಾರ ಮಾಡಿಯೇ ನಂತರ ಅವರ ಅನುಮತಿ ಪಡೆದುಕೊಂಡು ಪ್ರಕಟಿಸುತ್ತಿದ್ದೇನೆ. ಕೆಲವೊಂದು ಆಮಂತ್ರಣಗಳು ಖಾಸಗಿಯಾಗಿರಲೂ ಸಾಧ್ಯ. ಅಂತಹುಗಳಿಗೆ ಕರೆ ಮಾಡಿ ಖಾತ್ರಿ ಪಡೆದುಕೊಂಡೇ ಪ್ರಕಟಿಸುತ್ತಿದ್ದೇವೆ. ನಮ್ಮೆಲ್ಲರ ಪ್ರಯತ್ನದ ಮೇಲೆಯೂ ತಪ್ಪು ಘಟಿಸದಿರಲಿ ಎಂಬಂತೆ ಇದೊಂದು
Disclaimer:
"ಕೀಟಲೆ ಮಾಡೋರು, ಏಪ್ರಿಲ್ ಫೂಲ್ ಮಾಡೋರ ಬಗ್ಗೆ ನಾವು ಜವಾಬ್ದಾರರಲ್ಲ"